ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಾಗರಿಕರಿಗೆ ₹೧,೦೦೦ ಬಹುಮಾನ

Spread the love

ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಾಗರಿಕರಿಗೆ ₹೧,೦೦೦ ಬಹುಮಾನ

ಭಿಕ್ಷುಕರಿಂದ ಮುಕ್ತಗೊಳಿಸಲು ಇಂಧೋರ್ ಡಳಿತ ಘೋಷಿಸಿರುವ ₹೧,೦೦೦ ಬಹುಮಾನ ಯೋಜನೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ತಮ್ಮ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ವ್ಯಕ್ತಿಗಳ ಬಗ್ಗೆ ಮಾಹಿತಿಯೊಂದಿಗೆ ಮುಂದೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಆಡಳಿತವು ಭಿಕ್ಷಾಟನೆಯನ್ನು ನಿಷೇಧಿಸಿದ್ದು, ಜನರು ಭಿಕ್ಷೆ ನೀಡುವುದನ್ನು ಮತ್ತು ಭಿಕ್ಷುಕರಿಗೆ ನೀಡುವುದನ್ನು ನಿಷೇಧಿಸಿದೆ.

ಇಂಧೋರ್ ಸ್ಥಳೀಯ ಅಧಿಕಾರಿಗಳ ಪ್ರಕಾರ, ಆಡಳಿತವು ಜನವರಿ ೨ ರಂದು ನಿಷೇಧಾಜ್ಞೆ ಹೊರಡಿಸಿತು. ಭಿಕ್ಷಾಟನೆಯ ಬಗ್ಗೆ ಮಾಹಿತಿ ನೀಡುವವರಿಗೆ ₹೧,೦೦೦ ಬಹುಮಾನವನ್ನು ಘೋಷಿಸಿತು.

ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮೊಬೈಲ್ ಫೋನ್ ಸಂಖ್ಯೆಯನ್ನು ಸಹ ನೀಡಲಾಗಿದೆ ಎಂದು ಅವರು ಹೇಳಿದರು. ಕಳೆದ ನಾಲ್ಕು ದಿನಗಳಲ್ಲಿ ಸುಮಾರು ೨೦೦ ಮಂದಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ೧೨ ಮಂದಿ ನೀಡಿದ ಮಾಹಿತಿಯು ತನಿಖೆಯ ನಂತರ ಸರಿಯಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿದ್ದಾರೆ.

ಈ ಪೈಕಿ ಆರು ಮಂದಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಲಾ ₹೧೦೦೦ ಭಿಕ್ಷಾಟನೆಯ ವಿರುದ್ಧ ಆಡಳಿತದ ನಿಷೇಧ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ ೨೨೩ ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಗಳಿಗೆ ಒಂದು ರ‍್ಷದವರೆಗೆ ಜೈಲು ಶಿಕ್ಷೆ, ₹೫,೦೦೦ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಕಳೆದ ನಾಲ್ಕು ತಿಂಗಳಲ್ಲಿ ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ೪೦೦ ಮಂದಿಯನ್ನು ಪುರ‍್ವಸತಿಗಾಗಿ ಆಶ್ರಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ೬೪ ಮಕ್ಕಳನ್ನು ಶಿಶುಪಾಲನಾ ಸಂಸ್ಥೆಗೆ ಕಳುಹಿಸಲಾಗಿದೆ.

error: Content is protected !!