ಬೀಗ ಮುರಿದು ಲ್ಯಾಪ್‍ಟಾಪ್, ಪ್ರಿಂಟರ್ ಕಳವು

Spread the love

ಕಲಬುರಗಿ, ಜ.16-ಜಿಲ್ಲೆಯ ಆಳಂದ ತಾಲ್ಲೂಕಿನ ಲಾಡ್ ಚಿಂಚೋಳಿ ಹತ್ತಿರದ ನವಭಾರತ ಶಿಕ್ಷಣ ಸಂಸ್ಥೆಯ ಶಾಲೆಯ ಆಫೀಸ್ ರೂಮಿನ ಬೀಗ ಮುರಿದು ಲ್ಯಾಪ್‍ಟಾಪ್, ಪ್ರಿಂಟರ್ ಮತ್ತು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಲಾಡ್ ಚಿಂಚೋಳಿ ಗ್ರಾಮದ ನವೀನ್ ತಂದೆ ಜಯಾನಂದ ಹತ್ತರಕಿ (27) ಎಂಬಾತನನ್ನು ಬಂಧಿಸಿ 45 ಸಾವಿರ ರೂಪಾಯಿ ಮೌಲ್ಯದ ಡೆಲ್ ಕಂಪನೀಯ ಲ್ಯಾಪ್‍ಟಾಪ್, 45 ಸಾವಿರ ರೂಪಾಯಿ ಮೌಲ್ಯದ ಹೆಚ್‍ಪಿ ಕಂಪನೀಯ ಪ್ರಿಂಟರ್, 1500 ರೂ.ಮೌಲ್ಯದ ಖಾಲಿ ಗ್ಯಾಸ್ ಸಿಲಿಂಡರ್ ಮತ್ತು 2500 ರೂ.ಮೌಲ್ಯದ ತುಂಬಿದ ಗ್ಯಾಸ್ ಸಿಲಿಂಡರ್ ಸೇರಿ 94 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಾಲೆ ಬೀಗ ಮುರಿದು ಲ್ಯಾಪ್‍ಟಾಪ್, ಪ್ರಿಂಟರ್, ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಬಗ್ಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ಎಸ್‍ಡಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್ ಅವರ ಮಾರ್ಗದರ್ಶನದಲ್ಲಿ ಆಳಂದ ಡಿಎಸ್‍ಪಿ ಗೋಪಿ ಬಿ.ಆರ್., ಸಿಪಿಐ ಪ್ರಕಾಶ ಆರ್.ಯಾತನೂರ ಅವರ ನೇತೃತ್ವದಲ್ಲಿ ನರೋಣಾ ಪಿಎಸ್‍ಐ ಸಿದ್ದರಾಮ, ಸಿಬ್ಬಂದಿಗಳಾದ ಭಗವಂತರಾಯ, ರೇವಣಸಿದ್ದಪ್ಪ ಬಿರಾದಾರ, ಭೀಮಾಶಂಕರ ಉಡಗಿ, ರಾಮಲಿಂಗ, ರೇವಣಸಿದ್ದಪ್ಪ, ನಾಗರಾಜ, ಲಕ್ಷ್ಮೀಪುತ್ರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.

error: Content is protected !!